ದಿನದಿಂದ ದಿನಕ್ಕೆ ‘ಸಂತೆಯಲ್ಲಿ ನಿಂತ ಕಭೀರ’ ಸಿನಿಮಾಕ್ಕೆ ವ್ಯಾಪ್ತಿ ಹಾಗೂ ಪ್ರಾಪ್ತಿ ಹೆಚ್ಚಾಗುತ್ತ ಇದೆ. ಡಾ ಶಿವರಾಜಕುಮಾರ್, ಹಿಂದಿ ಸಿನಿಮಾಗಳ ಸಂಗೀತ ನಿರ್ದೇಶಕ ಇಸ್ಮೈಲ್ ದರ್ಬಾರ್, ತಮಿಳು ನಟ ಶರತ್ ಕುಮಾರ್ ಅವರ ಸೇರ್ಪಡೆ ಹಾಗೂ ಇದೀಗ ಜನಪ್ರಿಯ ನಟ ಅನಂತ್ ನಾಗ್ ‘ಕಭೀರ’ನ ಗುರು ರಮಾನಂದನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಶ್ರ್ರೀ ರಂಗಪಟ್ಟಣದಲ್ಲಿ ರಮಾನಂದನ ಪಾತ್ರದಾರಿ ಅನಂತ್ ನಾಗ್ ಅವರು ಹಲವಾರು ದೃಶ್ಯಗಳಲ್ಲಿ ಕ್ಯಾಮರಾ ಎದುರಿಸಿದ್ದಾರೆ. ನಾಲ್ಕು ಹಂತಗಳಲ್ಲಿ ಚಿತ್ರೀಕರಣ ಆಗಿ ಇದೀಗ ಐದನೇ ಹಂತದಲ್ಲಿ ‘ಸಂತೆಯಲ್ಲಿ ನಿಂದ ಕಬೀರ’ ಬಂದು ನಿಂತಿದೆ.
ಕಥಾ ನಾಯಕ ಡಾ ಶಿವರಾಜಕುಮಾರ್ ಹಾಗೂ ನಾಯಕಿ ಸನುಷ ಅಭಿನಯದ ಮತ್ತೊಂದು ಗೀತೆಯ ಚಿತ್ರೀಕರಣ ಸಹ ಚಿಕ್ಕಮಗಳೂರಿನಲ್ಲಿ ನಡೆಯುತ್ತಿದೆ ಎಂದು ಸಂತೋಷಗೊಂಡ ನಿರ್ದೇಶಕ ಇಂದ್ರ ಬಾಬು (ಕಬಡ್ಡಿ ಕನ್ನಡ ಸಿನಿಮಾ ರಾಜ್ಯ ಪ್ರಶಸ್ತಿ ವಿಜೇತ ನರೇಂದ್ರ ಬಾಬು) ತಿಳಿಸಿದ್ದಾರೆ.
ಇಸ್ಮೈಲ್ ದರ್ಬಾರ್ ಅವರ ಸಂಗೀತ ನಿರ್ದೇಶನದಲ್ಲಿ ಕಬಿರರ ‘ದೋಹಾ’ ಪ್ರಮುಖವಾಗಿ ಸಿನಿಮಾದಲ್ಲಿ ಅಳವಡಿಸಲಾಗಿದೆ.
ಸುಬ್ರಮಣ್ಯ ಪ್ರೊಡಕ್ಷನ್ ಆದಿಲಯಲ್ಲಿ ಹೊಸಪೇಟೆಯ ಕುಮಾರ ಸ್ವಾಮಿ ಪತ್ತಿಕೊಂಡ ನಿರ್ಮಾಣದ ‘ಸಂತೆಯಲ್ಲಿ ನಿಂದ ಕಬೀರ’ ಚಿತ್ರದಲ್ಲಿ ಡಾ ಶಿವರಾಜಕುಮಾರ್ ಜೊತೆಗೆ ಸನುಷ,ಶರತ್ ಕುಮಾರ್, ದತ್ತಣ್ಣ, ಅನಂತ್ ನಾಗ್, ಅವಿನಾಶ್, ಶರತ್ ಲೋಹಿತಾಶ್ವ, ಭಾಗೀರಥಿ ಬಾಯಿ ಕದಂ, ಸುನೀತಾ ರಾಮಾಚಾರಿ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.
ಗೋಪಾಲ ವಾಜಪೇಯಿ ಅವರ ಚಿತ್ರ ಕಥೆ, ಸಂಭಾಷಣೆಗೆ ಮೂಲ ಆಧಾರ ಭೀಷ್ಮ ಸಾಹ್ನಿ ಅವರ ಕಥೆ. ಪ್ರಭು ರಾಘವೇಂದ್ರ ಅವರ ಕಲಾ ನಿರ್ದೇಶನ, ನವೀನ್ ಕುಮಾರ್ ಛಾಯಾಗ್ರಹಣ, ವಿಶ್ವ ಸಂಕಲನ ಒದಗಿಸಿದ್ದಾರೆ.